ಸಾಹಿತ್ಯವನ್ನು ನಾವು ಏಕೆ ಓದಬೇಕು ಅಂದರೆ, “Our Life experience gains vitality; the mind becomes generous”.
ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಾನುಭವಕ್ಕೆ ಚೈತನ್ಯ ತುಂಬುವುದು ಅಗತ್ಯ. ಸುಮ್ಮನೆ ಬಾಳಪಥದಲ್ಲಿ ಸಾಗುತಿದ್ದರೆ ಅನುಭವ ಪ್ರಾಪ್ತಿಯಾಗುವುದಿಲ್ಲ. ವಯಸ್ಸಿನಲ್ಲಿ ಕೊಂಚ ಕಿರಿಯವನಾದರೂ ಕವಿ ಕೀಟ್ಸ್ ಹಿರಿಯ ಕವಿ ಶೆಲ್ಲಿಗೆ ಹೇಳಿದ ಒಂದು ಮಾತು ಹೀಗಿದೆ: “You load every rift with ore”, ಹಾಗೆಂದರೆ ನಿನ್ನ ಪ್ರತಿಯೊಂದು ಬಿರುಕಿಗೂ ಅದುರನ್ನು ತುಂಬು ಎಂದು. ಶೆಲ್ಲಿಯ ಕವಿತೆಗಳಲ್ಲಿ ಕೀಟ್ಸ್ಗೆ ಬಿರುಕುಗಳು ಕಂಡಿವೆ; ಅದನ್ನು ಚೈತನ್ಯದಿಂದ ತುಂಬಬೇಕು. ಇದನ್ನು ನಮ್ಮ ಬದುಕಿಗೇ ಹೋಲಿಸಿಕೊಳ್ಳಬಹುದು. ನವು ಬಹುತೇಕ ಮಂದಿ ಟೊಳ್ಳುಟೊಳ್ಳಾಗಿ ಬದುಕುತ್ತಿರುತ್ತೇವೆ; ಅದಕ್ಕೆ ಗಟ್ಟಿಯಿಂದ ತುಂಬಬೇಕು. ಆ ರೀತಿ ಟೊಳ್ಳಾದ ಬದುಕನ್ನು ಗಟ್ಟಿಗೊಳಿಸುವುದು, ಘನವಾಗಿಸುವುದು ಸಾಹಿತ್ಯ.
ಪ್ರತಿಯೊಬ್ಬ ಮನುಷ್ಯನಲ್ಲೂ ‘emotional dimension’ ಅಂತ ಇರತ್ತೆ. ಇದನ್ನ ಜಾಗೃತಗೊಳಿಸದೆ ಇದ್ದರೆ ಮನುಷ್ಯ ನರರಾಕ್ಷಕನಾಗಿ, ಕಡೆಗೆ ನರಭಕ್ಷಕನಾಗಿಯೂ ಪರಿವರ್ತಿತನಾಗಬಹುದು. ಜಗತ್ತಿನಲ್ಲಿ ಹಿಟ್ಲರ್, ಇದಿ ಅಮೀನ್ ತರಹದವರು ಕಾಣಿಸಿಕೊಳ್ಳುವುದು ಈ ಕಾರಣದಿಂದಲೇ.
ಸಾಹಿತ್ಯದ ‘ತ್ರಾಣ’ ಮತ್ತು ‘ಪ್ರಾಣ’ ಗಳೆಂದರೆ ಭಾವನೆಗಳೇ. ಜಗತ್ತಿನ ಶ್ರೇಷ್ಠ ಸಾಹಿತ್ಯವೆಲ್ಲ ನಮ್ಮ ಸಮಸ್ಯೆಗಳು ಮತ್ತು ಸಂಕಟಗಳನ್ನು ಸಹ್ಯಗೊಳಿಸುತ್ತದೆ. ಶೇಕ್ಸ್ಪಿಯರ್ ನ ಶ್ರೇಷ್ಠ ದುರಂತ ನಾಟಕಗಳಾದ ಹ್ಯಾಮ್ಲೆಟ್, ಒಥೆಲೊ, ಕೀನ್ಲಿಯರ್ ಮತ್ತು ಮೆಕ್ಬೆತ್ ಇದಕ್ಕೆ ಉದಾಹರಣೆಗಳು. ಅದೇ ತರಹ ರಾಮಾಯಣ ಮತ್ತು ಮಹಾಭಾರತ.
“Our sweetest songs are those that tell us of saddest thought”
ಎಂದು ಕವಿ ಶೆಲ್ಲಿ ಹೇಳುರುವಂತೆ ಹೃದಯದ ಪರಿಪಾಕಕ್ಕೆ ಕಾರಣವಾಗಿ ಸಾಹಿತ್ಯ ಬದುಕಿನ ದು:ಖ ದುಮ್ಮಾನಗಳನ್ನು ಎದುರಿಸುವ ಚೈತನ್ಯವನ್ನು ನೀಡುತ್ತದೆ. ಅದೇ ರೀತಿ ಸೌಂದರ್ಯವನ್ನು ಗುರ್ತಿಸಲೂ ಸಹ ಸಾಹಿತ್ಯ ನೆರವಾಗಿತ್ತದೆ. ಅತಿ ಪರಿಚಯತೆ ಸೌಂದರ್ಯವನ್ನು ಗುರ್ತಿಸುವುದರಲ್ಲಿ ಮುಖ್ಯವಾದ ಅಡ್ಡಿ. ಈ ಅಡ್ಡಿಯನ್ನು ನಿವಾರಿಸುವುದು ಕಾವ್ಯ.
ರಾಮನ ಕಿರೀಟದಾ
ರನ್ನವಣಿವೋಲೆ ರಮ್ಯಂ, ಪಂಚವಟಿಯೊಳ್
ತೃಣ ಸುಂದರಿಯ ಮೂಗುತಿಯ ಮುತ್ತು ಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ!
ಎಂದು ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸೌಂದರ್ಯದ ದರ್ಶನ ಮಾಡಿಸುತ್ತಾರೆ. ಹಾಗಾಗಿ “The poet removes the film of familiarity and makes us feel the freshnes of nature”.
ಸಾಹಿತ್ಯದ ಸಂಪರ್ಕದಿಂದ ದೂರವಾದಂತೆಲ್ಲ ಕಣ್ಣಿಗೆ ಕೊಬ್ಬು ತುಂಬಿಕೊಳ್ಳುತ್ತದೆ. ಈ ಕೊಬ್ಬಿನಿಂದಲೂ ದುರಾಸೆ ಹೆಚ್ಚುತ್ತದೆ; ಆಗ ದುರಂತ ಕಟ್ಟಿಟ್ಟ ಬುತ್ತಿ. ಏಕೆಂದರೆ
“Avarice is a form of insanity and insanity is incapacity for thought”.
ಸಾಹಿತ್ಯಾಧ್ಯಯನದಿಂದ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಂಚಿ ಊಟ ಮಾಡುವ ಉದಾರ ಮನೋಭಾವ ಬೆಳೆಯುತ್ತದೆ. “It awakens the latest facilities of our being to mysterious presences”. ಎಲ್ಲಕ್ಕಿಂತ ಮುಖ್ಯವಾಗಿ ಸಾಹಿಯಾಧ್ಯಯನ ಒಂಟಿಯಾಗಿ ನಡೆಯುವುದನ್ನು ಕಲಿಸುತ್ತದೆ. “Walk alone”. ಇದಕ್ಕೆ ಸಿಧ್ಧವಾಗುವುದು ಬಹಳ ಮುಖ್ಯ. ಅಂಥ ಧೈರ್ಯ, ಸ್ಥೈರ್ಯ, ಸಮಚಿತ್ತತೆ ನಿಮಗೆಲ್ಲ ಪ್ರಾಪ್ತವಾಗಲಿ ಎಂದು ಹಾರೈಸಿ, ಎಲ್ಲರಿಗೂ ವಂದಿಸಿ ವಿರಮಿಸುತ್ತೇನೆ.
ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಾನುಭವಕ್ಕೆ ಚೈತನ್ಯ ತುಂಬುವುದು ಅಗತ್ಯ. ಸುಮ್ಮನೆ ಬಾಳಪಥದಲ್ಲಿ ಸಾಗುತಿದ್ದರೆ ಅನುಭವ ಪ್ರಾಪ್ತಿಯಾಗುವುದಿಲ್ಲ. ವಯಸ್ಸಿನಲ್ಲಿ ಕೊಂಚ ಕಿರಿಯವನಾದರೂ ಕವಿ ಕೀಟ್ಸ್ ಹಿರಿಯ ಕವಿ ಶೆಲ್ಲಿಗೆ ಹೇಳಿದ ಒಂದು ಮಾತು ಹೀಗಿದೆ: “You load every rift with ore”, ಹಾಗೆಂದರೆ ನಿನ್ನ ಪ್ರತಿಯೊಂದು ಬಿರುಕಿಗೂ ಅದುರನ್ನು ತುಂಬು ಎಂದು. ಶೆಲ್ಲಿಯ ಕವಿತೆಗಳಲ್ಲಿ ಕೀಟ್ಸ್ಗೆ ಬಿರುಕುಗಳು ಕಂಡಿವೆ; ಅದನ್ನು ಚೈತನ್ಯದಿಂದ ತುಂಬಬೇಕು. ಇದನ್ನು ನಮ್ಮ ಬದುಕಿಗೇ ಹೋಲಿಸಿಕೊಳ್ಳಬಹುದು. ನವು ಬಹುತೇಕ ಮಂದಿ ಟೊಳ್ಳುಟೊಳ್ಳಾಗಿ ಬದುಕುತ್ತಿರುತ್ತೇವೆ; ಅದಕ್ಕೆ ಗಟ್ಟಿಯಿಂದ ತುಂಬಬೇಕು. ಆ ರೀತಿ ಟೊಳ್ಳಾದ ಬದುಕನ್ನು ಗಟ್ಟಿಗೊಳಿಸುವುದು, ಘನವಾಗಿಸುವುದು ಸಾಹಿತ್ಯ.
ಪ್ರತಿಯೊಬ್ಬ ಮನುಷ್ಯನಲ್ಲೂ ‘emotional dimension’ ಅಂತ ಇರತ್ತೆ. ಇದನ್ನ ಜಾಗೃತಗೊಳಿಸದೆ ಇದ್ದರೆ ಮನುಷ್ಯ ನರರಾಕ್ಷಕನಾಗಿ, ಕಡೆಗೆ ನರಭಕ್ಷಕನಾಗಿಯೂ ಪರಿವರ್ತಿತನಾಗಬಹುದು. ಜಗತ್ತಿನಲ್ಲಿ ಹಿಟ್ಲರ್, ಇದಿ ಅಮೀನ್ ತರಹದವರು ಕಾಣಿಸಿಕೊಳ್ಳುವುದು ಈ ಕಾರಣದಿಂದಲೇ.
ಸಾಹಿತ್ಯದ ‘ತ್ರಾಣ’ ಮತ್ತು ‘ಪ್ರಾಣ’ ಗಳೆಂದರೆ ಭಾವನೆಗಳೇ. ಜಗತ್ತಿನ ಶ್ರೇಷ್ಠ ಸಾಹಿತ್ಯವೆಲ್ಲ ನಮ್ಮ ಸಮಸ್ಯೆಗಳು ಮತ್ತು ಸಂಕಟಗಳನ್ನು ಸಹ್ಯಗೊಳಿಸುತ್ತದೆ. ಶೇಕ್ಸ್ಪಿಯರ್ ನ ಶ್ರೇಷ್ಠ ದುರಂತ ನಾಟಕಗಳಾದ ಹ್ಯಾಮ್ಲೆಟ್, ಒಥೆಲೊ, ಕೀನ್ಲಿಯರ್ ಮತ್ತು ಮೆಕ್ಬೆತ್ ಇದಕ್ಕೆ ಉದಾಹರಣೆಗಳು. ಅದೇ ತರಹ ರಾಮಾಯಣ ಮತ್ತು ಮಹಾಭಾರತ.
“Our sweetest songs are those that tell us of saddest thought”
ಎಂದು ಕವಿ ಶೆಲ್ಲಿ ಹೇಳುರುವಂತೆ ಹೃದಯದ ಪರಿಪಾಕಕ್ಕೆ ಕಾರಣವಾಗಿ ಸಾಹಿತ್ಯ ಬದುಕಿನ ದು:ಖ ದುಮ್ಮಾನಗಳನ್ನು ಎದುರಿಸುವ ಚೈತನ್ಯವನ್ನು ನೀಡುತ್ತದೆ. ಅದೇ ರೀತಿ ಸೌಂದರ್ಯವನ್ನು ಗುರ್ತಿಸಲೂ ಸಹ ಸಾಹಿತ್ಯ ನೆರವಾಗಿತ್ತದೆ. ಅತಿ ಪರಿಚಯತೆ ಸೌಂದರ್ಯವನ್ನು ಗುರ್ತಿಸುವುದರಲ್ಲಿ ಮುಖ್ಯವಾದ ಅಡ್ಡಿ. ಈ ಅಡ್ಡಿಯನ್ನು ನಿವಾರಿಸುವುದು ಕಾವ್ಯ.
ರಾಮನ ಕಿರೀಟದಾ
ರನ್ನವಣಿವೋಲೆ ರಮ್ಯಂ, ಪಂಚವಟಿಯೊಳ್
ತೃಣ ಸುಂದರಿಯ ಮೂಗುತಿಯ ಮುತ್ತು ಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ!
ಎಂದು ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸೌಂದರ್ಯದ ದರ್ಶನ ಮಾಡಿಸುತ್ತಾರೆ. ಹಾಗಾಗಿ “The poet removes the film of familiarity and makes us feel the freshnes of nature”.
ಸಾಹಿತ್ಯದ ಸಂಪರ್ಕದಿಂದ ದೂರವಾದಂತೆಲ್ಲ ಕಣ್ಣಿಗೆ ಕೊಬ್ಬು ತುಂಬಿಕೊಳ್ಳುತ್ತದೆ. ಈ ಕೊಬ್ಬಿನಿಂದಲೂ ದುರಾಸೆ ಹೆಚ್ಚುತ್ತದೆ; ಆಗ ದುರಂತ ಕಟ್ಟಿಟ್ಟ ಬುತ್ತಿ. ಏಕೆಂದರೆ
“Avarice is a form of insanity and insanity is incapacity for thought”.
ಸಾಹಿತ್ಯಾಧ್ಯಯನದಿಂದ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಂಚಿ ಊಟ ಮಾಡುವ ಉದಾರ ಮನೋಭಾವ ಬೆಳೆಯುತ್ತದೆ. “It awakens the latest facilities of our being to mysterious presences”. ಎಲ್ಲಕ್ಕಿಂತ ಮುಖ್ಯವಾಗಿ ಸಾಹಿಯಾಧ್ಯಯನ ಒಂಟಿಯಾಗಿ ನಡೆಯುವುದನ್ನು ಕಲಿಸುತ್ತದೆ. “Walk alone”. ಇದಕ್ಕೆ ಸಿಧ್ಧವಾಗುವುದು ಬಹಳ ಮುಖ್ಯ. ಅಂಥ ಧೈರ್ಯ, ಸ್ಥೈರ್ಯ, ಸಮಚಿತ್ತತೆ ನಿಮಗೆಲ್ಲ ಪ್ರಾಪ್ತವಾಗಲಿ ಎಂದು ಹಾರೈಸಿ, ಎಲ್ಲರಿಗೂ ವಂದಿಸಿ ವಿರಮಿಸುತ್ತೇನೆ.